ಮಾಜಿ ಶಾಸಕರಾದ ದೊಡ್ಡನಗೌಡ್ರು ಜಿ ಪಾಟೀಲರು ಸಂಸದರುಗಳಾದ ಪಿ ಸಿ ಗದ್ದಿಗೌಡ್ರು ಹಾಗು ರಮೇಶ ಜಿಗಜಿಣಗಿ,ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಅಕ್ಕಿ ಹಾಗು ತಾಲೂಕಿನ ಪ್ರಮುಖರ ನೇತೃತ್ವದಲ್ಲಿ, ಕೇಂದ್ರ ಸಚಿವರಾದ ಪ್ರಹಲ್ಹಾದ ಜೋಸಿ ಅವರ ಸಮ್ಮುಖದಲ್ಲಿ,ಇಲಕಲ್ಲ ನಗರದ ಬಹುದಿನಗಳ ಕನಸಾದ ಆಲಮಟ್ಟಿ ಟು ಚಿತ್ರದುರ್ಗಾ ಹೊಸ ರೈಲ್ವೆ ಮಾರ್ಗವನ್ನು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಹಾಗು ಕೇಂದ್ರದ,ರಾಜ್ಯ ರೈಲ್ವೆ ಸಚಿವರಾದ ವಿ ಸೋಮಣ್ಣಾ ಅವರುಗಳಿಗೆ ದಿಲ್ಲಿ ಅಧಿಕೃತ ಕಾರ್ಯಾಲಯದಲ್ಲಿ ಮನವಿಯನ್ನು ನೀಡಲಾಯಿತು, ಸಂದರ್ಭದಲ್ಲಿ ನಗರದ ಪ್ರಮುಖರಾದ ಜಿ ಪಿ ಪಾಟೀಲರು, ಮಹಾಂತಗೌಡ್ರು ಪಾಟೀಲರು, ವೆಂಕಟೇಶ ಪೋತಾ, ಟಿ ಎಚ್ ಕುಲಕರ್ಣಿ, ಚೋಳಪ್ಪಾ ಇಂಡಿ, ಮಲ್ಲಿಕಾರ್ಜುನ ಗಡಿಯನ್ನವರ, ದತ್ತಾತ್ರೇಯ ಗುಳೇದ, ಬಸವರಾಜ ಹುನಕುಂಟಿ, ಚಂದ್ರಶೇಖರ ಏಕಬೋಟೆ, ಮಹಾಂತೇಶ ಪೂಜಾರಿ, ಅನಿಲ ಬಡಿಗೇರ, ಮಹಾಂತೇಶ ಹೊಸಮನಿ, ಮುತ್ತಪ್ಪ ವಡ್ಡರ, ಮಹಾಂತೇಶ ಚಿತ್ತವಾದಾಗಿ, ವಿರೇಶ ಹಿರೇಮನಿ, ನಾಗಪ್ಪ ಕಳ್ಳಿಗುಡ್ಡ , ವಿರೇಶ ಪಾಟೀಲ, ಶಿವರಾಜ ಹಾವರಾಗಿ, ಹಾಗು ಬಸವರಾಜ ದಿವಾನಂದ ಇವರುಗಳು ಉಪಸ್ಥಿತರಿದ್ದರು.