Cricket : ಚೆನ್ನೈ ವಿರುದ್ಧ ರಣರೋಚಕ ಪಂದ್ಯದಲ್ಲಿ ಕೇವಲ 2 ರನ್​ನಿಂದ ಗೆದ್ದು ಬೀಗದ ಆರ್ ಸಿ ಬಿ

 


ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಜಯಭೇರಿ, ಕೇವಲ 2 ರನ್​ಗಳಿಂದ ಆರ್‌ಸಿಬಿ ತಂಡ ಗೆಲುವು ಸಾಧಿಸಿದೆ ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ 16 ಅಂಕಗಳಿಂದ ಅಗ್ರಸ್ಥಾನವನ್ನು ಪಡೆದುಕೊಂಡಿದೆ.


ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದರು. ಚೆನ್ನೈ ತಂಡ ಫೀಲ್ಡಿಂಗ್ ಮಾಡಿತು. ಆರ್​ಸಿಬಿ ಪರವಾಗಿ ಓಪನರ್​ಗಳಾಗಿ ವಿರಾಟ್​ ಕೊಹ್ಲಿ ಹಾಗೂ ಯಂಗ್ ಬ್ಯಾಟರ್ ಜಾಕೋಬ್ ಬೆಥೆಲ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪಂದ್ಯದಲ್ಲಿ 28 ಬಾಲ್ ಆಡಿದ ಬೆಥೆಲ್ 08 ಅದ್ಭುತವಾದ ಬೌಂಡರಿಗಳು ಹಾಗೂ 02 ಸಿಕ್ಸರ್​ನಿಂದ 53 ರನ್ ಬಾರಿಸಿದರು. 55 ರನ್​ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದಾಗ​​ ಬ್ರೆವಿಸ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು.


 ಆರ್ ಸಿ ಬಿ ಆಪತ್ಬಾಂಧವ ಕೊಹ್ಲಿ ಕೂಡ ಉತ್ತಮ ಬ್ಯಾಟಿಂಗ್ ಮಾಡಿ, ಕೇವಲ 29 ಎಸೆತಗಳಲ್ಲಿ 3 ಬೌಂಡರಿ, 05 ಸಿಕ್ಸರ್​ಗಳಿಂದ ಅರ್ಧಶತಕ ಸಿಡಿಸಿದರು. 05 ಬೌಂಡರಿ, 05 ಸಿಕ್ಸರ್​ಗಳಿಂದ 62 ರನ್​ ಗಳಿಸಿ ಸ್ಯಾಮ್ ಕರನ್​ ಬೌಲಿಂಗ್​ನಲ್ಲಿ ಔಟ್ ಆದರು. ಉಳಿದಂತೆ​ ದೇವದತ್ ಪಡಿಕ್ಕಲ್ 17, ರಜತ್ ಪಾಟಿದಾರ್ 11, ಜಿತೇಶ್ ಶರ್ಮಾ 11 ರನ್​ಗೆ ಔಟ್ ಆದರು. ಪಂದ್ಯದ ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರೊಮಾರಿಯೋ ಶೆಫರ್ಡ್ ಕೇವಲ 14 ಬಾಲ್​ಗಳನ್ನು ಎದುರಿಸಿ 04 ಬೌಂಡರಿ ಹಾಗೂ 06 ಸಿಕ್ಸರ್​ಗಳಿಂದ 53 ರನ್ ಚಚ್ಚಿದರು. ಇದರಿಂದ ಆರ್​ಸಿಬಿ 20 ಓವರ್​ಗಳಲ್ಲಿ 05 ವಿಕೆಟ್​ಗೆ 214 ರನ್​ಗಳ ಬೃಹತ್​ ಗುರಿ ನೀಡಿತ್ತು.



ಈ ದೊಡ್ಡ ಗುರಿ ಹಿಂದೆ ಬಿದ್ದ ಚೆನ್ನೈ ಆಟಗಾರರು ಆರಂಭದಲ್ಲಿ ಕೊಂಚ ಸಮಸ್ಯೆ ಎದುರಿಸಿದರು. ಓಪನರ್​ ಶೇಕ್ ರಶೀದ್ 14 ರನ್​ಗೆ ಪೆವಿಲಿಯನ್​ ಸೇರಿದರು. ಇವರ ಬಳಿಕ ಕ್ರೀಸ್​ಗೆ ಬಂದಿದ್ದ ಸ್ಯಾಮ್ ಕರನ್ 05ಕ್ಕೆ ವಿಕೆಟ್​​ ಕೀಪರ್​ಗೆ ಬಲಿಯಾದರು. ಆದರೆ ಇನ್ನೊಂದೆಡೆ ಓಪನರ್​ ಆಯುಷ್ ಮಾತ್ರೆ ಮಾತ್ರ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಆಯುಷ್ ಕೇವಲ 48 ಎಸೆತಗಳಲ್ಲಿ 09 ಬೌಂಡರಿ ಹಾಗೂ 05 ದೊಡ್ಡ ಸಿಕ್ಸರ್​ಗಳಿಂದ 94 ರನ್​ ಗಳಿಸಿ ಸಂಚುರಿ ಮಿಸ್ ಮಾಡಿಕೊಂಡರು ಸೆಂಚುರಿಗೆ ಇನ್ನು ಕೇವಲ 6 ರನ್​ಗಳು ಬೇಕಿದ್ದಾಗ ಲುಂಗಿ ಎನ್‌ಗಿಡಿ ಬೌಲಿಂಗ್​ನಲ್ಲಿ ಕೃನಾಲ್​ಗೆ ಕ್ಯಾಚ್ ಕೊಟ್ಟು ಬೇಸರದಿಂದ ಹೆಜ್ಜೆ ಹಾಕಿದರು.ಆರ್​ಸಿಬಿ ವಿರುದ್ಧ ಘರ್ಜನೆ ಮಾಡಿದ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೊನೆವರೆಗೂ ತಂಡಕ್ಕಾಗಿ ಹೋರಾಟ ಮಾಡಿದರು. 45 ಎಸೆತಗಳನ್ನು ಎದುರಿಸಿದ ಜಡೇಜಾ 08 ಬೌಂಡರಿ 02 ಸಿಕ್ಸರ್​ಗಳಿಂದ 77 ಗಳಿಸಿ ಅಜೇಯರಾಗಿ ಉಳಿದರು. ಕೊನೆಯಲ್ಲಿ ಜಡೇಜಾ ಜೊತೆ ಬ್ಯಾಟಿಂಗ್​ ಆರಂಭಿಸಿದ್ದ ಶಿವಂ ದುಬೆ 08 ರನ್​ ಗಳಿಸಿ ಆಡಿ ತಂಡವನ್ನು ಗೆಲ್ಲಿಸುವಲ್ಲಿ ಕೈಚೆಲ್ಲಿದರು. ಇದರಿಂದ ರಣರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್​ಸಿಬಿ ಅತ್ಯದ್ಭುತವಾದ ಗೆಲುವು ಪಡೆಯಿತು. ಕೊನೆಗೆ ಚೆನ್ನೈ 20 ಓವರ್​ಗಳಲ್ಲಿ 05 ವಿಕೆಟ್​ಗೆ 211 ರನ್ ಮಾತ್ರ ಗಳಿಸಿ ಸೋಲು ಒಪ್ಪಿತು.

Post a Comment

Previous Post Next Post

Contact Form