ಇಲಕಲ್ : ತಾಲೂಕಿನ ನೂತನ ತಹಶೀಲ್ದಾರರಾಗಿ ಆಗಮಿಸಿರುವ ಶ್ರೀ ಅಮರೇಶ ಪಮ್ಮಾರ ರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಇಳಕಲ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಹಾಗೂ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿಗಳ ವತಿಯಿಂದ ಗೌರವಿಸಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಪರಶುರಾಮ ಪಮ್ಮಾರ ರವರು ನೂತನ ತಹಶೀಲ್ದಾರಾಗಿ ಆಗಮಿಸಿರುವ ಮಾನ್ಯ ಅಮರೇಶ ಪಮ್ಮಾರ ರವರಿಗೆ ಇಳಕಲ್ ತಾಲೂಕಿನ ಸಮಸ್ತ ಸರಕಾರಿ ನೌಕರರ ಪರವಾಗಿ ಸ್ವಾಗತಿಸುತ್ತ ತಾಲೂಕಿನ ಕಟ್ಟ ಕಡೆಯ ಸಾರ್ವಜನಿಕರಿಗೂ ಸರ್ಕಾರದ ಯೋಜನೆಗಳು ಮುಟ್ಟುವಲ್ಲಿ ಪ್ರಾಮಾಣಿಕವಾಗಿ ತಮ್ಮೊಂದಿಗೆ ನಮ್ಮೆಲ್ಲ ಸರ್ಕಾರಿ ನೌಕರರು ಕೈಜೋಡಿಸುತ್ತಾರೆ ಎಂದು ಹೇಳಿ, ತಾಲೂಕಿಗೆ ಸ್ವಾಗತಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರರು ನಾವೆಲ್ಲ ಒಂದು ತಂಡವಾಗಿ ಕಾರ್ಯ ಮಾಡುವುದರ ಮೂಲಕ ಇಲಕಲ್ ತಾಲೂಕಿನ ಪ್ರಗತಿಗೆ ಕೈಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ, ರಾಜ್ಯ ಪರಿಷತ್ ಸದಸ್ಯರಾದ ಈಶ್ವರ ಗಡ್ಡಿ, ಕಾರ್ಯದರ್ಶಿ ಎಸ್ ಜಿ ಬಂಗಾರಿ,ಖಜಾಂಚಿ ಶರಣು ಕೊಣ್ಣೂರ,ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಹಾಂತೇಶ ಕಲ್ಮಠ,ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ನವೀನ್ ಬಲಕುಂದಿ ಪದಾಧಿಕಾರಿಗಳಾದ ಶಿವಪುತ್ರಪ್ಪ ಕತ್ತಿ, ಚಂದ್ರಶೇಖರ ಹಳದೂರ,ಅನಿತ್ ನಾಯಕ,ಲಿಂಗರಾಜ ಲೆಕ್ಕದ, ಶಂಕರ್ ಖತ್ರಿ, ಶ್ರೀಮತಿ ಎಸ್ ಎ ಪಠಾಣ,ಎಂ ಎಂ ಜಹೀಗೀರದಾರ,ನಾಸಿರಹುಸೇನ್ ಬೋರಗಿ, ಮಹಾಂತೇಶ್ ಕೂಡಲಗಿಮಠ, ಮಹಾಂತೇಶ ಗೌಡರ,ಸಂಗನಗೌಡ ನಾಡಗೌಡ, ಶ್ರೀ ದೇವನಗೌಡ,ಜಗದೀಶ ಅರಳಿಕಟ್ಟಿ,ಶ್ರೀಧರ್ ಜೋಗಿನ ಎಸ್ ಎಂ ಹುನಕುಂಟಿ, ಮಹಾಂತೇಶ ಹಾಲಕೇರಿ, ಅಂದಪ್ಪ ಮೇಳಿ,ಡಿ ಎಸ್ ಮಿರಾಕೋರ,ಅನಿಲ್ ಅಡವಿ, ವೀರನಗೌಡ ಪೊಲೀಸಪಾಟೀಲ, ಬಸವರಾಜ ಕುಂಟೋಜಿ ಹಾಗೂ ಕಂದಾಯ ಇಲಾಖೆಯ ಎಲ್ಲಾ ನೌಕರ ಭಾಂಧವರು ಉಪಸ್ಥಿತರಿದ್ದರು.